
22nd June 2025
ಬೈಲಹೊಂಗಲ- ಮನುಷ್ಯನಿಗೆ ಐಶ್ವರ್ಯ,ಅಂತಸ್ತಿಗಿಂತ ಆರೋಗ್ಯವನ್ನು ಕಾಪಾಡಿಕೊಂಡು ಜೀವಿಸುವದು ಅತೀ ಮುಖ್ಯವಾಗಿದೆ ಎಂದು ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮಿಜಿ ಹೇಳಿದರು.
ಅವರು ಪಟ್ಟಣದ ಶ್ರೀ ದಾನಮ್ಮದೇವಿ ದೇವಸ್ಥಾನದ ಹತ್ತಿರ ಮಲಪ್ರಭಾ ಮಲ್ಟಿಸ್ಪೆμÁಲಿಟಿ ಹಾಸ್ಪಿಟಲ್ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಅಹಾರ, ವ್ಯವಹಾರ, ನೀರು, ನಿದ್ರೆಯಲ್ಲಿ ವ್ಯವಸ್ಥತೆ ಇರಬೇಕು ಅಂದರೆ ಮಾತ್ರ ನಮ್ಮ ಆರೋಗ್ಯ ಚೆನ್ನಾಗಿರಲು ಸಾಧ್ಯ. ನಮ್ಮ ಆರೋಗ್ಯ ನಾವೇ ಕಾಪಾಡಿಕೊಳ್ಳಬೇಕು. ಇನ್ನೊಬ್ಬರಿಂದ ಇದು ಸಾಧ್ಯವಿಲ್ಲ. ಈ ಮನುಷ್ಯ ಜನ್ಮ ಸಾರ್ಥಕತೆಪಡೆದುಕೊಳ್ಳಲು ಆರೋಗ್ಯ ಮುಖ್ಯ . ಆಧುನಿಕತೆಗೆ ತಕ್ಕಂತೆ ನಿರ್ಮಾಣವಾಗಿರುವ ನೂತನ ಆಸ್ಪತ್ರೆಯಿಂದ ಜನತೆಯ ಎಲ್ಲ ರೀತಿಯ ಆರೋಗ್ಯ ಸಮಸ್ಯೆ ದೂರವಾಗಲಿ ಎಂದು ಹಾರೈಸಿದರು.
ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮಿಜಿ ಮಾತನಾಡಿ, ನಾಡು ಆರೋಗ್ಯಭರಿತವಾಗಿರಲು ಇಂತಹ ಆಸ್ಪತ್ರೆಗಳ ಅವಶ್ಯಕತೆ ಇದೆ. ಜನತೆಯ ನಂಬಿಕೆಯಂತೆ ವೈದ್ಯರು ಕಾರ್ಯನಿರ್ವಹಿಲಿದ್ದಾರೆ. ಜನತೆ ಬೆಳಗಾಂವಕ್ಕೆ ತೆರಳುವ ತಾಪತ್ರಯ ತಪ್ಪಲಿದೆ ಎಂದರು.
ಮುರಗೋಡದ ನೀಲಕಂಠ ಸ್ವಾಮಿಜಿ, ಮಾತನಾಡಿ, ಕಡಿಮೆ ವಚ್ಚದಲ್ಲಿ ಚಿಕಿತ್ಸೆ ಉತ್ತಮ ಆರೋಗ್ಯ ನೀಡುವ ಮೂಲಕ ಜಿಲ್ಲೆಯಲ್ಲಿ ಆಸ್ಪತ್ರೆಯು ಮಾದರಿಯಾಗಲಿ. ಜನತೆಯ ನಂಬಿಕೆಯನ್ನು ವೈದ್ಯರು ಪ್ರಾಮಾಣಿಕತೆಯಿಂದ ನಿರ್ವಹಿಸಲಿ ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಭವ್ಯವಾದ ಅಸ್ಪತ್ರೆಯ ಮೂಲಕ ನಾಡಿನ ಸೇವೆ ಯುವ ವೈದ್ಯರಿಂದ ಪ್ರಾಮಾಣಿಕವಾಗಿ ನಡೆಯಲಿದೆ. ಚಿಕಿತ್ಸೆ ಕೊಡಿವುದಲ್ಲದೆ ಜನತೆ ಅನಾರೋಗ್ಯಕ್ಕೆ ಈಡಾಗದಂತೆ ಜಾಗೃತಿ ಮೂಡಿಸುವ ಕೆಲಸ ಸಕಲ ವೈದ್ಯರಿಂದ ನಡೆಯಬೇಕೆಂದರು.
ಸಂಸದೆ ಪ್ರೀಯಾಂಕಾ ಜಾರಕಿಹೊಳಿ ಮಾತನಾಡಿ, ಆಧುನಿಕತೆಗ ತಕ್ಕಂತೆ ಸಮಾಜಕ್ಕೆ ಒಳ್ಳೆಯದನ್ನು ಮಾಡಲು ವೈದ್ಯ ದಂಪತಿಗಳ ತಂಡ ಮುಂದಾಗಿರುವದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಪಟ್ಟಣಕ್ಕೆ ಅವಶ್ಯಕತೆ ಇದ್ದ ಸುಸಜ್ಜಿತ ಆಸ್ಪತ್ರೆ ಪ್ರಾರಂಭವಾಗಿದೆ. ವೈದ್ಯರು ಜನತೆಗೆ ಮಾತು ಕೊಟ್ಟಂತೆ ಪ್ರಾಮಾಣಿಕತೆಯಿಂದ ಕಡಿಮೆ ವೆಚ್ಚದ ಉತ್ತಮ ಸೌಲಭ್ಯ ನೀಡಿ ಜನಾನುರಾಗಿ ವೈದ್ಯರಾಗಿ ಹೊರಹೊಮ್ಮಬೇಕೆಂದರು.
ಮೌಲಾನಾ ಶೌಕತಅಲಿ ಬಾದಿ ಮಾತನಾಡಿ, ವೈದ್ಯರು ದೇವರ ರೂಪವಾಗಿದ್ದು, ಜನತೆಗೆ ನೆಮ್ಮದಿ ಬದುಕು ನೀಡಲು ಪ್ರಾಮಾಣಿಕ ಸೇವೆ ಮಾಡಬೇಕೆಂದರು. ಡಾ.ಮಂಜುನಾಥ ಮುದಕನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಒಂದೇ ಸೂರಿನಡಿ, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಮತ್ತು ಅತ್ಯಾಧುನಿಕ ಸೌಲಭ್ಯದೊಂದಿಗೆ ಪ್ರಾಮಾಣಿಕವಾಗಿ ಚಿಕಿತ್ಸೆ ನೀಡುವ ಪ್ರಮಾಣ ಮಾಡುವೆವು ಎಂದರು.
ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿದರು. ಹಿರಿಯ ವೈದ್ಯರಾದ ಡಾ.ಬಿ.ಎಸ್.ಮಹಾಂತಶೆಟ್ಟಿ, ಡಾ.ಎ.ಎನ್.ಬಾಳಿ ಅವರನ್ನು ಸನ್ಮಾನಿಸಲಾಯಿತು. ಅನ್ವಿμÁ ದೊಡವಾಡ ಭರತನ್ಯಾಟ್ಯ ಪ್ರದರ್ಶಿಸಿದರು.
ನಯಾನಗರದ ಅಭಿನವ ಸಿದ್ದಲಿಂಗ ಸ್ವಾಮಿಜಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ. ಕೆ. ಪ್ರಭಾ ಅಕ್ಕಾ, ಮಾಜಿ ಶಾಸಕ ಮಹಾಂತೇಶ ದೊಡಗೌಡ್ರ, ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಕಾಂಗ್ರೇಸ್ ಮುಖಂಡ ಮಲ್ಲಪ್ಪ ಮುರಗೋಡ, ಹಿರಿಯ ನ್ಯಾಯವಾದಿ ಬಿ.ಎಸ್. ಕಿವಡಸನ್ನವರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಈಶ್ವರಪ್ಪ ಗಡಾದ, ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ ಸಿದ್ದನ್ನವರ, ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ,ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಉದ್ಯಮಿ ವಿಜಯ ಮೆಟಗುಡ್ಡ, ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ, ಮಂಜುಳಾ ದೊಡಗೌಡರ, ಇಂಜನೀಯರ್ ರಾಹುಲ ಪಾಟೀಲ, ಆಸ್ಪತ್ರೆಯ ವೈದ್ಯರಾದ ಡಾ.ಅಶೋಕ ದೊಡವಾಡ ಡಾ.ರವೀಂದ್ರಕುಮಾರ ಜಕನೂರ, ಶೈಲಜಾ ಮುದಕನಗೌಡರ, ಡಾ.ವಿಜಯಲಕ್ಷ್ಮೀ ದೊಡವಾಡ, ಡಾ.ಸಿಂಧು ಅಂಗಡಿ, ಆಡಳಿತಾಧಿಕಾರಿ ಕವಿತಾ ಜಕನೂರ
ಹಾಗೂ ಸಾವಿರಾರು ಜನರು ಇದ್ದರು. ಡಾ.ಶರಣಕುಮಾರ ಅಂಗಡಿ ಸ್ವಾಗತಿಸಿದರು. ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ನಿರೂಪಿಸಿದರು.
ಶ್ರೀಮತಿ ತಂಗವ್ವ ನಂದಪ್ಪ ಬಾಗೇವಾಡಿ ಇವರ ಶತಮಾನೋತ್ಸವದ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಸಮಾರಂಭ
ಕನ್ನಡದ ಹೆಸರಾಂತ ಕಲಾವಿದ ರಂಗಕರ್ಮಿ ಕನ್ನಡಪರ ಹೋರಾಟಗಾರ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ ವಿ ನಾಗರಾಜ ಮೂರ್ತಿ ಹಾಗೂ ಪ್ರಿಯಾಂಕ ಮಾಸಪತ್ರಿಕೆ ಎಕ್ಸಿಕ್ಯೂಟಿವ್ ಸಂಪಾದಕಿ ಎಸ್. ಜಿ. ತುಂಗಾ ರೇಣುಕಾ ದಂಪತಿಗಳಿಂದ ಮುಂಜಾನೆ ಬೆಳಕು